Close Menu
New Karnataka
    What's Hot

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026

    ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    Facebook X (Twitter) Instagram YouTube
    New KarnatakaNew Karnataka
    • Home

      PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

      May 17, 2026

      ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

      May 17, 2026

      ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

      May 17, 2026

      ₹78,000 ವರೆಗೆ ಸೊಲಾರ್ ಸಬ್ಸಿಡಿ: PM Surya Ghar Yojana ಕುರಿತು ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ವಿವರ

      May 16, 2026

      ಮಳೆಗಾಲದಲ್ಲಿ ಗಿಡಗಳ ಕಾಳಜಿ: ನಿಮ್ಮ ತೋಟವನ್ನು ಹಸಿರಾಗಿಡಲು ಸಂಪೂರ್ಣ ಮಾರ್ಗದರ್ಶಿ

      May 16, 2026
    • Trending
    • Entertainment
    • Auto & Tech
      • Auto
      • Tech
    • Finance
    • Lifestyle
    • Jobs & Govt schemes
      • Jobs
      • Govt schemes
    • Self Employment Training
    • Cricket
    New Karnataka
    Home » ಹಣ ಪಡೆದು ಆಹಾರ ನೀಡದೆ ಬಸ್‌ನಲ್ಲಿ ಕುಳಿತಿದ್ದ ಬಡವನಿಗೆ ವಂಚಿಸಿದ ವ್ಯಾಪಾರಿ;ವಿಡಿಯೋ ವೈರಲ್!
    Trending

    ಹಣ ಪಡೆದು ಆಹಾರ ನೀಡದೆ ಬಸ್‌ನಲ್ಲಿ ಕುಳಿತಿದ್ದ ಬಡವನಿಗೆ ವಂಚಿಸಿದ ವ್ಯಾಪಾರಿ;ವಿಡಿಯೋ ವೈರಲ್!

    New KarnatakaBy New KarnatakaMarch 21, 20262 Mins Read
    Share WhatsApp Facebook Twitter LinkedIn Telegram Email
    Vendor cheated poor man
    Share
    WhatsApp Facebook Twitter LinkedIn Email

    ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ನಮ್ಮ ಮುಖದಲ್ಲಿ ನಗು ತರಿಸಿದರೆ, ಇನ್ನು ಕೆಲವು ಮನುಷ್ಯತ್ವವೇ ಸತ್ತೋಗಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತವೆ. ಇದೀಗ ಅಂತಹದ್ದೇ ಒಂದು ಕರುಳು ಹಿಂಡುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

    ಘಟನೆಯೇನು?
    ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬಸ್‌ನ ಕಿಟಕಿ ಬಳಿ ಕುಳಿತಿದ್ದ ಬಡ ವ್ಯಕ್ತಿಯೊಬ್ಬರು ತಮ್ಮ ಹಸಿವು ನೀಗಿಸಿಕೊಳ್ಳಲು ಹೊರಗಿದ್ದ ವ್ಯಾಪಾರಿಯೊಬ್ಬನಿಗೆ ಆಹಾರಕ್ಕಾಗಿ ಹಣ ನೀಡುತ್ತಾರೆ. ಆದರೆ, ಹಣ ಪಡೆದುಕೊಂಡ ಆ ವ್ಯಾಪಾರಿ ಆಹಾರವನ್ನು ಕೊಡಲು ಮೀನಮೇಷ ಎಣಿಸುತ್ತಾನೆ. ಅಷ್ಟರಲ್ಲಿ ಬಸ್ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಬಸ್ ಹೊರಟ ತಕ್ಷಣ ಆಹಾರವನ್ನು ಆ ಬಡವನ ಕೈಗೆ ನೀಡುವ ಬದಲು, ಆ ವ್ಯಾಪಾರಿ ಉದ್ದೇಶಪೂರ್ವಕವಾಗಿಯೇ ಅದನ್ನು ತನ್ನ ಬಳಿಯೇ ಉಳಿಸಿಕೊಳ್ಳುತ್ತಾನೆ.

    ಮಾನವೀಯತೆ ಮರೆತ ವ್ಯಾಪಾರಿಯ ಕ್ರೂರ ನಗು
    ಬಸ್ ಮುಂದೆ ಸಾಗುತ್ತಿದ್ದಂತೆ, ತಾನು ನೀಡಿದ ಹಣವೂ ಹೋಯಿತು, ತಿನ್ನಲು ಆಹಾರವೂ ಸಿಗಲಿಲ್ಲ ಎಂಬ ಅಸಹಾಯಕತೆಯಲ್ಲಿ ಆ ಬಡ ವ್ಯಕ್ತಿ ಕಿಟಕಿಯಿಂದ ನೋಡುತ್ತಾ ದೂರಾಗುತ್ತಾರೆ. ಆದರೆ, ಇತ್ತ ಆ ವ್ಯಾಪಾರಿ ತಾನೇನೋ ದೊಡ್ಡ ಸಾಧನೆ ಮಾಡಿದವನಂತೆ, ದೊಡ್ಡ ಯುದ್ಧವನ್ನೇ ಗೆದ್ದವನಂತೆ ಬಸ್‌ನತ್ತ ನೋಡಿ ನಿರ್ಲಜ್ಜವಾಗಿ ನಗುತ್ತಾ ನಿಂತಿರುತ್ತಾನೆ. ಬಡವನೊಬ್ಬನಿಗೆ ವಂಚಿಸಿದ ಖುಷಿಯಲ್ಲಿ ಆತನ ಮುಖದಲ್ಲಿ ಮೂಡಿದ ಆ ಕ್ರೂರ ನಗು ವಿಡಿಯೋ ನೋಡುವ ಪ್ರತಿಯೊಬ್ಬರ ರಕ್ತ ಕುದಿಯುವಂತೆ ಮಾಡುತ್ತದೆ.

    ಭುಗಿಲೆದ್ದ ನೆಟ್ಟಿಗರ ಆಕ್ರೋಶ
    ಎಕ್ಸ್ (ಹಿಂದಿನ ಟ್ವಿಟರ್) ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ವೀಡಿಯೊ ನೋಡಿದ ಪ್ರತಿಯೊಬ್ಬರೂ ವ್ಯಾಪಾರಿಯ ಅಮಾನವೀಯ ವರ್ತನೆಗೆ ಹಿಡಿಶಾಪ ಹಾಕುತ್ತಿದ್ದಾರೆ.

    “ಬಡವರ ಹಸಿವಿನ ಜೊತೆ ಆಟವಾಡಿ, ಅವರ ಹೊಟ್ಟೆ ಮೇಲೆ ಹೊಡೆದು ಇವನು ಹೇಗೆ ಉದ್ದಾರ ಆಗುತ್ತಾನೆ?”, “ಇಂತಹ ಕೃತ್ಯವೆಸಗಿದ ಈತನಿಗೆ ತಕ್ಕ ಶಾಸ್ತಿಯಾಗಬೇಕು”, “ಮನುಷ್ಯತ್ವ ಅನ್ನೋದೇ ಉಳಿದಿಲ್ಲ” ಎಂದು ನೆಟ್ಟಿಗರು ಕಮೆಂಟ್‌ಗಳ ಮೂಲಕ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ.

    ಕರುಣೆ, ದಯೆ ಎಂಬುದು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಇಂತಹ ಘಟನೆಗಳು ಸಮಾಜದ ಕರಾಳ ಮುಖವನ್ನು ಅನಾವರಣಗೊಳಿಸುತ್ತವೆ. ಕೆಲವೇ ಕೆಲವು ರೂಪಾಯಿಗಳಿಗಾಗಿ ಬಡವನೊಬ್ಬನಿಗೆ ಮೋಸ ಮಾಡಿದ ಆ ವ್ಯಾಪಾರಿಯ ಕೃತ್ಯಕ್ಕೆ ಎಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗಿದೆ.

    A poor man on a moving bus paid a vendor for food, but the vendor didn't give him anything. As the bus left, Vendor kept smiling like he had gained something big. pic.twitter.com/8tfXEk309v

    — News Algebra (@NewsAlgebraIND) March 21, 2026
    news in kannada social Media Viral trending news Viral video
    Share. Facebook Twitter WhatsApp LinkedIn Email
    Previous Articleಪ್ರವಾಸೋದ್ಯಮ ಇಲಾಖೆಯಿಂದ ಉಚಿತ ಹೋಟೆಲ್ ಮ್ಯಾನೇಜ್‌ಮೆಂಟ್ ತರಬೇತಿ ಜೊತೆಗೆ ₹2,000 ಸ್ಟೈಫಂಡ್; ಸಂಪೂರ್ಣ ಮಾಹಿತಿ ಇಲ್ಲಿದೆ.
    Next Article ನಿಮ್ಮ Start-up ಕನಸಿಗೆ ಜೀವ ತುಂಬಲಿದೆ ‘ಉನ್ನತಿ ಯೋಜನೆ’: ಸಿಗಲಿದೆ ₹50 ಲಕ್ಷ ಫಂಡ್!

    Related Posts

    Trending

    ರಜನಿ, ಕಮಲ್ ವಿಫಲರಾದ ರಾಜಕೀಯ ಅಖಾಡದಲ್ಲಿ ದಳಪತಿ ವಿಜಯ್ ಗೆದ್ದಿದ್ದೇಗೆ?

    May 5, 2026
    Trending

    2026 ವಿಧಾನಸಭೆ ಚುನಾವಣಾ ಫಲಿತಾಂಶ: ಬಂಗಾಳದಲ್ಲಿ ಬಿಜೆಪಿ ಕಲಿ, ತಮಿಳುನಾಡಿನಲ್ಲಿ ವಿಜಯ್ ಅಬ್ಬರ! ಪೂರ್ಣ ವಿವರ

    May 4, 2026
    Trending

    ನೇಪಾಳ ಸರ್ಕಾರಿ ನೌಕರರಿಗೆ ಇನ್ಮುಂದೆ 15 ದಿನಕ್ಕೊಮ್ಮೆ ಸಂಬಳ: ಹೊಸ ವೇತನ ವ್ಯವಸ್ಥೆಯ ಸಂಪೂರ್ಣ ವಿವರ

    April 22, 2026
    Top Posts

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Stay In Touch
    • Facebook
    • YouTube
    • TikTok
    • WhatsApp
    • Twitter
    • Instagram
    Latest Reviews
    Most Popular

    ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ನಿಮ್ಮ ವಾಹನದ ಮೈಲೇಜ್ ಕಡಿಮೆಯಾಗೋದು! ಇಲ್ಲಿದೆ ಪರಿಹಾರ

    April 14, 2026827 Views

    ಬಜೆಟ್ ಸ್ನೇಹಿ ಬೈಕ್ ಹುಡುಕುತ್ತಿದ್ದೀರಾ? Hero Splendor Plus ಅಥವಾ HF Deluxe ಖರೀದಿಸುವ ಮುನ್ನ ಇದನ್ನು ಓದಿ.

    March 23, 2026496 Views

    ಬೆಲೆಕಾನ್‌ ಬೀಚ್; ಓಂ ಬೀಚ್ ಸೌಂದರ್ಯವನ್ನೇ ಮೀರಿಸುವಂತಿರುವ ಗೋಕರ್ಣ ಸಮೀಪದ ಸುಂದರ ತೀರ

    November 23, 2025286 Views
    Our Picks

    PBKS vs RCB Highlights: ಪಂಜಾಬ್ ಕಿಂಗ್ಸ್ ವಿರುದ್ಧ RCB ಗೆ 23 ರನ್‌ಗಳ ಭರ್ಜರಿ ಜಯ | IPL 2026

    May 17, 2026

    ವಿಜಯ್‌ಗೆ ಕಮಲ್ ಹಾಸನ್ ವಿಶೇಷ ಉಡುಗೊರೆ: ಶಾಲು, ಹಾರದ ಬದಲಾಗಿ ಸಿಕ್ಕಿದ್ದೇನು ಗೊತ್ತಾ?

    May 17, 2026

    ಬೇಲ್ ಟೀಸರ್ ರಿಲೀಸ್: ‘ಡೇರ್ ಡೆವಿಲ್’ ಆಗಿ ಅಬ್ಬರಿಸಿದ ಶಿವಣ್ಣ!

    May 17, 2026
    Facebook X (Twitter) Instagram YouTube WhatsApp
    • About Us
    • Contact Us
    • Disclaimer
    • Privacy Policy
    © 2026 New Karnataka |. Designed by Karnataka Best Digital Services.

    Type above and press Enter to search. Press Esc to cancel.