ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ ಸಿನಿಪ್ರಿಯರನ್ನು ರಂಜಿಸಲು ಯಶಸ್ಸಾಗಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ 509.25ಕೋಟಿ ಒಟ್ಟು ಗಳಿಕೆ(Gross collection Worldwide) ಮಾಡಿದೆ ಎಂದು ಸ್ವತಃ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ನರೇಂದ್ರ ಮೋದಿಯವರು ಗುಜರಾತ್ನ ಮುಖ್ಯಮಂತ್ರಿಯಾಗಿ (2001–2014) 2014ರಲ್ಲಿ ಪ್ರಧಾನಿಯಾದರು, ಹಿಂದೂತ್ವ, “ಮೇಕ್ ಇನ್ ಇಂಡಿಯಾ” ಮತ್ತು ಕಲ್ಯಾಣ ಯೋಜನೆಗಳ ಮೂಲಕ ದೊಡ್ಡ ರಾಜಕೀಯ ಶಕ್ತಿಯಾಗಿ ಮಾರ್ಪಟ್ಟರು. ನರೇಂದ್ರ ಮೋದಿಯವರು ಭಾರತೀಯ ಜನತಾ ಪಕ್ಷದ (BJP) ನಾಯಕರಾಗಿ ಮತ್ತು ದೀರ್ಘಕಾಲದ ಕಾಂಗ್ರೆಸ್ಸೆತರ ಪ್ರಧಾನಿಯಾಗಿ, ಅವರ ಆಕರ್ಷಕ ಉಪಸ್ಥಿತಿ, ಭಾಷಣ ಕೌಶಲ್ಯ, ದೈವಿಕ ವ್ಯಕ್ತಿತ್ವ ಎಂತವರನ್ನೂ ಮಂತ್ರಮುಗ್ಧ ಗೊಳಿಸುವುದು ಸಹಜ. ಅದೇ ರೀತಿಯ ಅನುಭವವನ್ನು ರಿಷಭ್ ಶೆಟ್ಟಿಯವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಕಾಂತಾರ ಚಾಪ್ಟರ್ 1 ಚಿತ್ರದ ಕ್ಯಾಪ್ಟನ್ ರಿಷಭ್ ಶೆಟ್ಟಿ ದೇಶದಾದ್ಯಂತ ಚಿತ್ರದ ಪ್ರಚಾರ ಕಾರ್ಯದಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಹಿಂದಿ ನ್ಯೂಸ್ ಚಾನೆಲ್ ನ ಸಂದರ್ಶನವೊಂದರಲ್ಲಿ ನಿರೂಪಕಿಯು ಕಾಂತಾರ ಚಿತ್ರದ ಮೇಕಿಂಗ್, ರಿಷಭ್ ಶೆಟ್ಟಿ ಮತ್ತು ಅವರ ಚಿತ್ರತಂಡ ಚಿತ್ರಕ್ಕಾಗಿ ಪಟ್ಟ ಶ್ರಮ, ಬಗ್ಗೆ ಪ್ರಶ್ನಿಸುತ್ತಾ “ನೀವು ಈ ಹಿಂದೆ ಅಂದರೆ ಹಳೆಯ ಕಾಂತಾರ ಚಿತ್ರ ಯಶಸ್ಸು ಕಂಡಾಗ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರನ್ನು ಭೇಟಿ ಮಾಡಿದ್ದಿರಿ, ಹೇಗೆ ಅನ್ನಿಸಿತು ಆ ಅನುಭವ?” ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ರಿಷಭ್ ಶೆಟ್ಟಿ “ನರೇಂದ್ರ ಮೋದಿಯವರ ಬೇಟಿ ನನ್ನ ಜೀವನದ ಅತಿ ಮಹತ್ವದ ಘಟನೆ, ನಾವು ನಮ್ಮ ಹಳ್ಳಿಯಲ್ಲಿ ವಾಸಿಸುತ್ತಿರುವಾಗ ನಮ್ಮ ಕ್ಷೇತ್ರದ MLA ಫೋಟೊವನ್ನೇ ದಿನಪತ್ರಿಕೆಯಲ್ಲಿ ನೋಡಿ ಆನಂದಿಸುತ್ತಿದ್ದೆವು, ಇಂತಹ ಹಳ್ಳಿಯಿಂದ ಬಂದ ನನ್ನಂತಹ ಯುವಕನಿಗೆ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದು ನನಗಾಗಲಿ, ನನ್ನ ಕುಟುಂಬದವರಿಗಾಗಲಿ, ನನ್ನ ಊರಿನವರಿಗಾಗಲಿ ಬಹಳ ಹೆಮ್ಮೆಯ ವಿಷಯ. ಮೋದಿಯವರ AURA (ವಿಶೇಷ ಜನಾಕರ್ಷಣೆ) ಬಗ್ಗೆ ತುಂಬಾ ಜನ ಹೇಳುತ್ತಾರೆ, ಹಾಗೇಯೆ ಅವರನ್ನು ಭೇಟಿಯಾದಾಗ ಆ AURA ನನಗೂ ಅನುಭವವಾಯಿತು. ಅವರು ಕೋಣೆ ಪ್ರವೇಶಿಸುತ್ತಿದ್ದಂತೆ ಆ AURA ನನಗೆ ಅನುಭವವಾಯಿತು.
ಅವರಿಗೆ ಭಾರತದ ಎಲ್ಲಾ ಚಿತ್ರೋದ್ಯಮಗಳ ಬಗ್ಗೆ ಮಾಹಿತಿ ಇದೆ. ಅವರು ಭಾರತದ ಸುಂದರ ದ್ವೀಪಗಳ ಬಗ್ಗೆ ಮಾತನಾಡಿದರು. ಸಿನೆಮಾ ಚಿತ್ರಿಕರಣಕ್ಕಾಗಿ ವಿದೇಶಗಳಿಗೆ ಹೋಗುವ ಬದಲು ನಮ್ಮ ಭಾರತದ ದ್ವೀಪಗಳನ್ನು ಎಕ್ಷ್ ಪ್ಲೋರ್ ಮಾಡಿ ಎಂದು ಸಲಹೆ ನೀಡಿದರು. ಎಂದು ರಿಷಭ್ ಶೆಟ್ಟಿ ಮೋದಿಯವರ ಭೇಟಿಯ ಅನುಭವವನ್ನು ಹಂಚಿಕೊಂಡರು.
ಸಂದರ್ಶನದ ಪೂರ್ತಿ ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ